ಬುಧವಾರ, ಮೇ 4

ಭಸ್ಮಾಸುರನ ಬದುಕು ಶೋಭೆಯಲ್ಲ..

ಒಂದು ಪುಟ್ಟ ಅಧ್ಯಯನ ಮಾಡಿದಾಗ ಅನ್ನಿಸಿದ್ದು ಸಾಕಷ್ಟು ಮಂದಿ ಭಸ್ಮಾಸುರನ ಗುಣಲಕ್ಷಣಗಳನ್ನು ಬೆಳೆಸಿಕೊಂಡು ಅನರ್ಥದ ನಡೆಗಳಲ್ಲಿ ಆದರ್ಶದ ಮುಖವಾಡ ಹಾಕಿಕೊಂಡು ನಡೆಯುತ್ತಿದ್ದಾರೆ. ಇದು ಖಂಡಿತಾ ಶೋಭೆಯಲ್ಲ.ನಿಮಗೆ ಉಪಕಾರ ಮಾಡುವ ವ್ಯಕ್ತಿಗೆ ನೀವು ಅಪಕಾರ ಮಾಡಿದರೆ ದೇವರು ಕ್ಷಮಿಸುತ್ತಾನಾ? ಕೃತಜ್ಞತೆ ಇಲ್ಲದ ಬದುಕು!!!
ನೀವು ಯಾರಿಗಾದರೂ ಸಹಾಯ ಮಾಡಿದರೆ ನಿಮ್ಮ ಮನಃ ತೃಪ್ತಿ ಮತ್ತು ಆತ್ಮ ತೃಪ್ತಿ.ಅದು ಬಿಟ್ಟು ನಾನು ಅವರಿಗೆ ಆ ಸಹಾಯ ಮಾಡಿದೆ ಇವರಿಗೆ ಈ ಸಹಾಯ ಮಾಡಿದೆ ಅಂತ ಹೇಳುವಿರಾ? ಪ್ರತಿಭೆ ಮತ್ತು ನಾಯಕತ್ವದ ಸ್ನೇಹ ನಿದರ್ಶನ ಶ್ರೇಷ್ಟತೆ ಬಯಸುತ್ತದೆ.ಯಾರ...ೋ ಏನೋ ನಿಮ್ಮ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರೆ ನಿಮ್ಮ ಬೆಲೆ ಕಡಿಮೆಯಾಗುತ್ತದಾ?
ನಾನು ನೋಡಿದ ಮಹಾನ್ ವ್ಯಕ್ತಿ ವಾಸನ್. ಮುಚ್ಚುಮರೆಯಿಲ್ಲದೆ ಸತ್ಯವನ್ನು ತಿಳಿಸುವ ನುಡಿದಂತೆ ನಡೆಯುವ ವಿಚಾರವಾದಿ.ಸಾವಿರಾರು ಅಯೋಗ್ಯ ಮನಸ್ಸಿನ ಸ್ನೇಹಿತರಿಗಿಂತ ಒಂದೆರಡು ಉತ್ತಮ ಮನಸ್ಸಿನ ಸ್ನೇಹಿತರು ಸಾಕಲ್ಲವೇ??? ನಿಮನ್ನು ಅರ್ಥ ಮಾಡಿಕೊಳ್ಳಲು ನಿಮ್ಮಂತೆಯೇ ಮನಸ್ಸಿರುವ ಜನರಿಂದ ಮಾತ್ರ ಸಾಧ್ಯ. ಭಸ್ಮಾಸುರರು ಕೊನೆಗೆ ತಮ್ಮ ತಲೆಯ ಮೇಲೆ ತಾವೇ ಕೈಯಿಟ್ಟುಕೊಳ್ಳುವಂತೆ ಖಂಡಿತ ಆ ದಿವ್ಯಶಕ್ತಿ ಮಾಡಿಸುತ್ದದೆ.ಅದರಲ್ಲಿ ನನಗೆ ನಂಬಿಕೆ ಇದೆ.

ಕಾಮೆಂಟ್‌ಗಳಿಲ್ಲ: