ಬುಧವಾರ, ಮೇ 4

ಭಾವನೆಗಳಿಗೂ ಆಯುಷ್ಯವಿರುತ್ತದಾ ???

ಬಿಕ್ಕಿ ಬಿಕ್ಕಿ ಅಳುವ ನಿರಂತರ ಯಾತನೆಗಳ ನಡುವೆ ಸಾಗುವ ಕೆಲವರ ಬದುಕು ಭಾವಶೂನ್ಯತೆಯಿಂದ ನರಳುತ್ತದಾ.ಭಾವನೆಗಳು ಸತ್ತು ಹೋಗುತ್ತವಾ.ಹಾಗಾದರೆ ಭಾವನೆಗಳಿಗೂ ಆಯುಷ್ಯವಿರುತ್ತದಾ???
ಕನಸ್ಸು ಕಟ್ಟಿಕೊಳ್ಳುವ ಭಾವನೆಗಳು ಬದುಕಿನ ಹಟಾತ್ ಜರ್ಜರಿತತೆಯಿಂದ ಯಾವ ಮಟ್ಟ ತಲುಪುತ್ತದೆ ಗೊತ್ತಾ??? ಬದುಕೇ ಮುಗಿದು ಹೋದಂತೆ ನನಗೇನು ಬೇಕಾಗಿಲ್ಲ ಬದುಕೇ ಬೇಕಾಗಿಲ್ಲ ಅನ್ನಿಸುವ ಭಾವನೆಗಳ ಅಂದಾಜು ಮಾಡಬಹುದಾ ???
...
ಹೀಗೆಲ್ಲಾ ಪ್ರತಿ ಮನುಷ್ಯನಿಗೆ ಸೂಕ್ಷ್ಮ ಸನ್ನಿವೇಷಗಳು ಬದುಕಿನಲ್ಲಿ ಬಂದು ಹೋಗುತ್ತದೆ ಮತ್ತು ಅದು ಹೋಗಲೇ ಬೇಕು.ಒಂದು ವೇಳೆ ಅದು ಹೋಗದೆ ಖಾಯಂ ನೆಲೆಸಿಬಿಟ್ಟರೆ ಸಾವಿನ ಲೋಕದ ಹೆಬ್ಬಾಗಿಲು ತೆರೆದಂತೆಯೇ ಲೆಕ್ಕ.
ಮನುಷ್ಯ ಸಂಬಂಧಗಳಲ್ಲಿ ನಂಬಿಕೆ ಇಲ್ಲ.ಬಂಧು ಬಾಂಧವರು ಅಸೂಯೆ ಪಡುವವರು ಸ್ನೇಹಿತರು ಮುಚ್ಚುಮರೆಯಿಂದ ನಡೆದುಕೊಳ್ಳುತ್ತಾರೆ.ಧರ್ಮರಾಯನಂತೆ ಬದುಕು ನಡೆಸಿದರೂ ಅಪವಾದ ಹೀಗೆ ಹೈರಾಣಿಸಿ ಹೋಗುವ ಬದುಕಿನಲ್ಲಿ ಭಾವನೆಗಳ ಪಾತ್ರವೇನು? ಅವೆಲ್ಲಾ ಸತ್ತು ಹೋದರೂ ವ್ಯಕ್ತಿ ಬದುಕುತ್ತಿರುತ್ತಾನೆ ಗೊಂಬೆಗಳ ಲವ್ ಪಾತ್ರಗಳಂತೆ.
ಇದೆಲ್ಲವನ್ನೂ ಮೆಟ್ಟಿ ನಿಲ್ಲುವ ಮನೋರಂಜನೆ,ಕುಪಿತ ಬುದ್ಧಿ ಅರ್ಥವಿಲ್ಲದ ಸಾಗುವ ಬದುಕಿನ ಸಹಪ್ರಯಾಣಿಕರು.ಹೀಗೆಲ್ಲಾ ಬದುಕಿನ ಪಥಸಂಚಲನೆಯಲ್ಲಿ ಮಾತಾಡು ಸಾಕು ಮೌನ ಬಿಸಾಕು ಎಂಬ ಭಾವನೆ ಹೊಸಹುಟ್ಟು.ಬದುಕು ಎಂಬುದರ ಅರ್ಥ ಸಾಕಷ್ಡು ಬದಲಾಗಿದೆ.ಬದುಕುತ್ತಿರುವುದು ಯಾವ ಅಸ್ತಿತ್ವ!!! ಆತ್ಮ!!! ಪ್ರಾಣಿಯಂತೆ ದೇಹ!!! ಜೀವಂತ ಶವ!!!ಅವರವರ ಭಾವಕ್ಕೆ ಭಾವನೆಗಳ ಆಯುಷ್ಯದಂತೆ ಬದುಕು ನಿಧಾನವಾಗಿ ಕಮರಿಹೋಗುವುದು ಕರಾಳ ಸತ್ಯ.

ಕಾಮೆಂಟ್‌ಗಳಿಲ್ಲ: